‘ಇಸಂ ಅನ್ನು ಅಳಿಸಿಹಾಕುತ್ತೇನೆ, ಒಂದು ಧರ್ಮವನ್ನೇ ಭೂಮಿಯಿಂದ ನಿರ್ಮೂಲನೆ ಮಾಡುತ್ತೇನೆ ಎಂದು ಹೇಳುವ ಅನಂತಕುಮಾರ ಹೆಗಡೆಯವರು ಹಿಂದೂವಾಗಲಾರರು’ ಎಂದು ಪ್ರಕಾಶ್ ರೈ ಹೇಳಿದ್ದಾರೆ. ಅಷ್ಟರಲ್ಲಿ ವೀಕ್ಷಕರ ಸಾಲಿನಲ್ಲಿದ್ದ ಬಿಜೆಪಿ ವಕ್ತಾರ, ಕೃಷ್ಣಸಾಗರ್ ರಾವ್ ಎಂದು ಗುರುತಿಸಿಕೊಂಡ ವ್ಯಕ್ತಿ ಮಧ್ಯಪ್ರವೇಶಿಸಲು ಮುಂದಾದರು. ಆದರೆ ಮತ್ತೆ ಮಾತು ಮುಂದುವರಿಸಿದ ಪ್ರಕಾಶ ರೈ, ‘ಹತ್ಯೆಯನ್ನು ಬೆಂಬಲಿಸುವ ವ್ಯಕ್ತಿಯೊಬ್ಬ ಹಿಂದೂವಾಗಲು ಸಾಧ್ಯವಿಲ್ಲ’ ಎಂದರು.