ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಲ್ಲಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹಸಿರು ನಿಶಾನೆ ತೋರಿದ್ದರಿಂದಲೇ ಇಂದು ಚನ್ನಪಟ್ಟಣದಲ್ಲಿ ನೀರಾವರಿ ಕ್ರಾಂತಿ ಆಗಿದೆ. ಹೀಗಾಗಿ ತಾಲ್ಲೂಕಿನ ಜನತೆಯ ಮೇಲೆ ಅವರ ಋಣ ಇದೆ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕೆಆರ್ಎಸ್ನಿಂದ ಮಾರ್ಕಂಡಳ್ಳಿ ಜಲಾಶಯದವರೆಗೆ ಗುರುತ್ವಾಕರ್ಷಣೆ ಬಲದಿಂದಲೇ ಕಾವೇರಿ ನೀರು ತರುವ ಕನಸು ಹೊಂದಿದ್ದೇನೆ. ಇದು ಸಕಾರಗೊಂಡಲ್ಲಿ ನಾಲ್ಕು ಜಿಲ್ಲೆಗಳ 1500ಕ್ಕೂ ಹೆಚ್ಚು ಕೆರೆಗಳು ತುಂಬುವ ಜೊತೆಗೆ ಕಣ್ವ, ಶಿಂಷಾ, ಅರ್ಕಾವತಿ, ವೃಷಭಾವತಿಗೆ ಜೀವ ಬರಲಿದೆ ಎಂದರು.