ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಳೇ ಪಿಂಚಣಿ ಯೋಜನೆಯೇ ಇರಲಿ’

Last Updated 19 ಜನವರಿ 2018, 9:09 IST
ಅಕ್ಷರ ಗಾತ್ರ

ಬಳ್ಳಾರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ‘ನೂತನ ಪಿಂಚಣಿ ಯೋಜನೆ ರದ್ದುಪಡಿಸಬೇಕು’ ಎಂದು ಆಗ್ರಹಿಸಿ ಸರ್ಕಾರಿ ನೌಕರರ ಸಂಘ ಹಾಗೂ ಎನ್‌ಪಿಎಸ್‌ ನೌಕರರ ಸಂಘದ ಮುಖಂಡರು ಗುರುವಾರ ಸಾಂಕೇತಿಕ ಧರಣಿ ನಡೆಸಿದರು.

ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ವೇಳೆ ಮಾತನಾಡಿದ ಸ್ಥಳೀಯ ಸಂಘದ ಅಧ್ಯಕ್ಷ ಎಂ.ಟಿ.ಮಲ್ಲೇಶ್‌, ‘ಹೊಸ ಯೋಜನೆಯು ನೌಕರರ ನಿವೃತ್ತಿ ಜೀವನವನ್ನು ಅತಂತ್ರಗೊಳಿಸಲಿದೆ. ಜೀವನ ಭದ್ರತೆಯನ್ನೇ ಕಸಿದುಕೊಳ್ಳಲಿರುವ ಯೋಜನೆಯನ್ನು ವಾಪಸ್‌ ಪಡೆದು, ಹಿಂದಿನ ಯೋಜನೆಯನ್ನೇ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

‘ಹಳೇ ಪಿಂಚಣಿ ಯೋಜನೆಯಲ್ಲಿ 33 ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ಶೇ 50ರಷ್ಟು ನಿಶ್ಚಿತ ಪಿಂಚಣಿ ದೊರಕುತ್ತದೆ. ಆದರೆ ಹೊಸ ಯೋಜನೆಯಲ್ಲಿ ಅದಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದರೂ ಕಡಿಮೆ ಪಿಂಚಣಿ ನಿಗದಿಯಾಗುತ್ತದೆ’ ಎಂದು ದೂರಿದರು.

ಮುಖಂಡರಾದ ಜಿ.ಕೆ.ರಾಮಕೃಷ್ಣ, ಟಿ.ರಾಜಾರೆಡ್ಡಿ, ಎಂ.ಶಿವಾಜಿರಾವ್, ಪಿ.ನಾಗರಾಜ, ಕೆ.ಪಂಪನಗೌಡ, ವಿ.ಆನಂದನಾಯ್ಕ, ಕೆ.ಹನುಮಂತಪ್ಪ, ಜಿ.ತಿಪ್ಪಾರೆಡ್ಡಿ, ಕೆ.ಮರಿಸ್ವಾಮಿ, ಎನ್.ಪೆದ್ದಣ್ಣ, ವೆಂಕಟೇಶ, ಹನುಮಂತರಾಯ ಪಾಲ್ಗೊಂಡಿದ್ದರು.

ಎನ್‌ಪಿಎಸ್‌‌ ರದ್ದತಿಗೆ ಆಗ್ರಹ

ಕೂಡ್ಲಿಗಿ: ಹೊಸ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್‌) ರದ್ದುಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಪಟ್ಟಣದ ತಹಶೀಲ್ದಾರ್‌ ಕಚೇರಿಯ ಅಧಿಕಾರಿಗೆ‌ ಗುರುವಾರ ಮನವಿ ಸಲ್ಲಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಪಿ.ವಿ. ಕೊತ್ಲಪ್ಪ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ. ನಾಗನಗೌಡ, ಪ್ರಧಾನ ಕಾರ್ಯದರ್ಶಿ ಕೆ.ಯರ‍್ರಿಸ್ವಾಮಿ, ವಿಭಾಗೀಯ ಉಪಾಧ್ಯಕ್ಷೆ ಜಿ. ಜಿನಾಭಿ, ಎನ್‌ಪಿಎಸ್ ನೌಕರರ ಸಂಘದ ಸಂಚಾಲಕ ಅಣ್ಣಪ್ಪಸ್ವಾಮಿ, ಜಂಟಿ ಕಾರ್ಯದರ್ಶಿ ನಂದಿ ಬಸವರಾಜ, ಡಾ. ಷಣ್ಮುಖ ನಾಯ್ಕ್, ಮುಬೀನಾ, ದೊಡ್ಡಪ್ಪ, ಎಚ್. ಬಸವರಾಜ, ಷಣ್ಮುಖಪ್ಪ, ನೀಲಾ ನಾಯ್ಕ್ ಇದ್ದರು.

ನೌಕರರಿಂದ ಧರಣಿ

ಸಂಡೂರು: ಹೊಸ ಪಿಂಚಣಿ ಯೋಜನೆಯನ್ನು(ಎನ್‌ಪಿಎಸ್‌) ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಸದಸ್ಯರು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಧರಣಿ ನಡೆಸಿದರು. ಬಳಿಕ ತಹಶೀಲ್ದಾರ್ ಎಚ್.ಎಂ. ರಮೇಶ್ ಅವರಿಗೆ ಮನವಿ ಸಲ್ಲಿಸಿದರು.

ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಲ್. ಜಯಶೀಲ್, ಉಪಾಧ್ಯಕ್ಷ ಉರುಕುಂದೆಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಬಿ. ಕಂಪ್ಲಿ, ಮುಖಂಡರಾದ ಎ. ಕೃಷ್ಣಪ್ಪ, ಪದ್ಮನಾಭರಾವ್, ಪರಶುರಾಮ್, ಎಂ.ಟಿ. ರಾಥೋಡ್, ಪರಶುರಾಮ್, ಚರಂತಯ್ಯ, ಕೊಟ್ರೇಶ್, ಬಿ.ಎಸ್. ನಾಗರಾಜ್, ಪದ್ಮಾವತಿ, ಭುವನೇಶ್ವರಿ, ಪರಿಮಳ, ಸುನಿತಾ ಭಾಗವಹಿಸಿದ್ದರು.

ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಸಿರುಗುಪ್ಪ: ಹೊಸ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್‌) ರದ್ದುಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಸಂಘದ ಪದಾಧಿಕಾರಿಗಳು ನಗರದ ತಹಶೀಲ್ದಾರ್ ಕಚೇರಿಗೆ ಗುರುವಾರ ಮನವಿ ಸಲ್ಲಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ರಾಮನಗೌಡ, ಮುಖಂಡರಾದ ಶಿವಪ್ಪ ಬಾರೆಗಿಡದ್, ಚೊಕ್ಕ ಹನುಮಂತಗೌಡ, ದಿವಾಕರ ನಾರಾಯಣ, ಯರ‍್ರೆಪ್ಪ, ಗಜೇಂದ್ರ, ದಿವಾಕರ ರಾವ್, ಶ್ರೀಧರ್, ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT