‘ಶಿಕ್ಷಣ ಕ್ಷೇತ್ರದಲ್ಲಿ ಬಂಥನಾಳ ಸ್ವಾಮೀಜಿ ಹೆಸರು ದೊಡ್ಡದು. ಉಳ್ಳವರ ಬಳಿ ತೆರಳಿ ಅವರ ಮನವೊಲಿಸಿ ದಾನ ಪಡೆಯುವುದರಲ್ಲಿ ನಿಸ್ಸೀಮರು. ತಾವು ಭೇಟಿಯಾದ ಸಂದರ್ಭ ಪ್ರಸಾದ ಎಂದು ದಾನಿಗಳಿಗೆ ಉಂಡೆ ಕೊಡುತ್ತಿದ್ದರು. ಇದನ್ನು ಭಕ್ತರೊಬ್ಬರು ಪ್ರಶ್ನಿಸಿದಾಗ, ‘ಹಸುವಿಗೆ ಚೆನ್ನಾಗಿ ಮೇವು, ನೀರು, ಬೂಸಾ ವ್ಯವಸ್ಥೆ ಮಾಡಿದರೆ ಮಾತ್ರ ಹಿಂಡಿಕೊಳ್ಳಬೌದು. ಇಲ್ಲದಿದ್ದರೆ ಹೆಚ್ಚು ಹಾಲು ಸಿಗಲ್ಲ. ಅದಕ್ಕಾ ಅವರಿಗೆ ಉಂಡಿ ಕೊಡ್ತೀನಿ’ ಅಂದಿದ್ರಂತೆ. ಹಂಗ ನಾವೂ ದೇಣಿಗೆ ನೀಡೋರನ್ನ ಚೆನ್ನಾಗಿ ನೋಡ್ಕೋತೀವಿ. ಆದಾಯಕ್ಕಾಗಿ ಕಾಂಪ್ಲೆಕ್ಸ್ ಕಟ್ತೀವಿ. ಇದರೊಳಗೆ ನಮ್ಮ ಸಾಮಾಜಿಕ, ಧಾರ್ಮಿಕ ಸೇವೆನಾ ನಡೆಸ್ತೀವಿ’ ಎನ್ನುತ್ತಿದ್ದಂತೆ ಸಭಾಂಗಣ ನಗೆಗಡಲಲ್ಲಿ ತೇಲಿತು.