ಸತ್ಯಂ ಕಂಪ್ಯೂಟರ್ ಹಗರಣದಲ್ಲಿ ತಪ್ಪು ಎಸಗಿರುವುದು ಸಾಬೀತಾಗಿರುವ ಕಾರಣಕ್ಕೆ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ), ‘ಪಿಡಬ್ಲ್ಯು’ ಮೇಲೆ ಎರಡು ವರ್ಷಗಳ ನಿಷೇಧ ವಿಧಿಸಿತ್ತು. ‘ಪಿಡಬ್ಲ್ಯು’ ಮತ್ತು ಅದರ ಅಂಗ ಸಂಸ್ಥೆಗಳು ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಕಾರ್ಪೊ ರೇಟ್ಗಳ ಲೆಕ್ಕಪತ್ರಗ
ಳನ್ನು ಎರಡು ವರ್ಷಗಳ ಕಾಲ ತಪಾಸಣೆ ನಡೆಸದಂತೆ ನಿರ್ಬಂಧ ಹೇರಿದೆ. ಪ್ರೈಸ್ ವಾಟರ್ಹೌಸ್ ಬೆಂಗಳೂರು ಮತ್ತು ಅದರ ಈ ಹಿಂದಿನ ಪಾಲುದಾರ ಸಂಸ್ಥೆಗಳಾದ ಎಸ್. ಗೋಪಾಲಕೃಷ್ಣನ್ ಮತ್ತು ಶ್ರೀನಿವಾಸ್ ತಲ್ಲೂರಿ ಕಾನೂನುಬಾಹಿರವಾಗಿ ಮಾಡಿಕೊಂಡಿರುವ ₹ 13 ಕೋಟಿ ಲಾಭವನ್ನು ಶೇ 12ರ ಬಡ್ಡಿ ದರದಲ್ಲಿ 45 ದಿನಗಳಲ್ಲಿ ಪಾವತಿಸಬೇಕು ಎಂದೂ ನಿರ್ದೇಶನ ನೀಡಲಾಗಿದೆ. ‘ಸೆಬಿ’ಯ ಈ ನಿಷೇಧದ ವಿರುದ್ಧ ಸಂಸ್ಥೆಯು ಮೇಲ್ಮನವಿ ಸಲ್ಲಿಸಿತ್ತು.