ಶನಿವಾರ ಗ್ರಾಮಕ್ಕೆ ಬಂದ ಕಂಪನಿಯ ಪ್ರತಿನಿಧಿಗಳು ಗ್ಯಾನ್ ಚಂದ್ರ ಅವರನ್ನು ಹಿಡಿದುಕೊಂಡು ಟ್ರ್ಯಾಕ್ಟರ್ ಕೀ ಕಸಿದುಕೊಂಡರು. ಬಳಿಕ, ಟ್ರ್ಯಾಕ್ಟರ್ ಚಲಾಯಿಸಿಕೊಂಡು ತೆರಳುತ್ತಿದ್ದಾಗ ಆತಂಕಗೊಂಡಿದ್ದ ಗ್ಯಾನ್ ಚಂದ್ರ ಅವರು ಅಡ್ಡ ನಿಂತು ತಡೆಯಲು ಯತ್ನಿಸಿದ್ದಾರೆ. ಆಗ ಒಬ್ಬ ಪ್ರತಿನಿಧಿ ಗ್ಯಾನ್ ಚಂದ್ರ ಅವರನ್ನು ಪಕ್ಕಕ್ಕೆ ತಳ್ಳಿದರು. ಆದರೆ, ಟ್ರ್ಯಾಕ್ಟರ್ ಅತಿ ವೇಗದಲ್ಲಿ ಚಲಾಯಿಸಿದ್ದರಿಂದ ಗ್ಯಾನ್ ಚಂದ್ರ ಮೇಲೆಯೇ ಹರಿಯಿತು. ಸ್ಥಳದಲ್ಲೇ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.