ಗ್ರಾಮದ ಸರ್ವೆ ನಂ 32, 33, 34, 35 ಮತ್ತು 42ರಲ್ಲಿ ಸುಮಾರು 55 ಎಕೆರೆ ಸರ್ಕಾರಿ ಗೋಮಾಳವಿದ್ದು ಇದನ್ನು ಅದೇ ಗ್ರಾಮದ ದಲಿತರು ಸಾಗು ಮಾಡುತ್ತಿದ್ದಾರೆ. ಅದೇ ಜಾಗದಲ್ಲಿ ಕಮಲ್ ಪಾಷಾ ಎಂಬ ಉದ್ಯಮಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಲು ಮುಂದಾದಾಗ ದಲಿತರಿಂದ ಭಾರಿ ಪ್ರತಿರೋಧವುಂಟಾಗಿತ್ತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ವೆ ಮಾಡಿಸಿ ಕಾಮಗಾರಿ ನಡೆಸದಂತೆ ಸೂಚಿಸಿದ್ದರು. ಆದರೂ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಪ್ರಸನ್ನಕುಮಾರ್, ಅಂಜಿನಪ್ಪ, ಗಂಗಾಧರಯ್ಯ, ನರಸಿಂಹಮೂರ್ತಿ, ಕ್ವಾಮಿಟಿ ಮೂರ್ತಿ, ದೇವರಾಜು, ಟಿ.ಜಿ. ನರಸಿಂಹಯ್ಯ ಆರೋಪಿಸಿದರು.