ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಮೇಲೆ ಸಿಂಧು, ಶ್ರೀಕಾಂತ್ ಕಣ್ಣು

Last Updated 22 ಜನವರಿ 2018, 20:03 IST
ಅಕ್ಷರ ಗಾತ್ರ

ಜಕಾರ್ತ: ಭಾರತದ ಪಿ.ವಿ. ಸಿಂಧು, ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಮಂಗಳವಾರ ಆರಂಭವಾಗುವ ಇಂಡೋನೆಷ್ಯಾ ಮಾಸ್ಟರ್ಸ್ ವಿಶ್ವ ಟೂರ್ ಸೂಪರ್–500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯ ಲ್ಲಿದ್ದಾರೆ.

ಈ ವರ್ಷದ ಮೊದಲ ಟೂರ್ನಿ ಇದಾಗಿದ್ದು ಭಾರತದ ಆಟಗಾರರು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಋತುವಿನಲ್ಲಿ ಸಿಂಧು ಮೂರು ಪ್ರಶಸ್ತಿ ಮತ್ತು ಮೂರು ಟೂರ್ನಿಗಳಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಶ್ರೀಕಾಂತ್ ನಾಲ್ಕು ಟೂರ್ನಿಗಳಲ್ಲಿ ಪ್ರಶಸ್ತಿ ಮತ್ತು ಒಂದು ರನ್ನರ್ಸ್ ಅಪ್ ಪಡೆದಿದ್ದರು.

ಈಚೆಗೆ ಮುಗಿದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಟೂರ್ನಿಯಲ್ಲಿಯೂ ಸಿಂಧು ಉತ್ತಮ ವಾಗಿ ಆಡಿದ್ದರು. ಅದರಲ್ಲಿ ಕೊರಿಯಾದ ಸಂಗ್ ಜಿ ಯೂನ್ ವಿರುದ್ಧದ ಪಂದ್ಯದಲ್ಲಿ ಮಾತ್ರ ಸೋತಿದ್ದರು. ಆ ಟೂರ್ನಿಯಲ್ಲಿ ಶ್ರೀಕಾಂತ್ ಮೂರು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ್ದರು.

ಫುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್. ಪ್ರಣಯ್ ಕೂಡ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಇಲ್ಲಿ ಮೊದಲ ಸುತ್ತಿನಲ್ಲಿ ಅವರು ಡೆನ್ಮಾರ್ಕ್‌ನ ರಸ್ಮಸ್ ಗೆಮ್ಕೆ ವಿರುದ್ಧ ಆಡಲಿದ್ದಾರೆ. ಸಮೀರ್ ವರ್ಮಾ ಗಾಯದಿಂದ ಚೇತರಿಸಿಕೊಂಡಿದ್ದಾರೆ.

ಸೈನಾ ಮೇಲೆ ಭರವಸೆ
ಹೋದ ವರ್ಷ ಹಿಮ್ಮಡಿ ನೋವಿ ನಿಂದ ಬಳಲಿದ್ದ ಸೈನಾ ನೆಹ್ವಾಲ್ ಇಲ್ಲಿ ಕಣಕ್ಕಿಳಿಯಲಿದ್ದಾರೆ. ಅವರು ಈಚೆಗೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಟೂರ್ನಿಯ  ಮೊದಲ ಸುತ್ತಿನಲ್ಲಿ ಸೈನಾ ಎಂಟನೇ ಶ್ರೇಯಾಂಕದ ಆಟಗಾರ್ತಿ ಚೆನ್ ಯೂಫಿ ಅವರನ್ನು ಎದುರಿಸುವರು.

ಕಣದಲ್ಲಿ ಅಭಿಷೇಕ್
ಧಾರವಾಡದ ಆಟಗಾರ ಅಭಿಷೇಕ್ ಯಲಿಗಾರ್ ಅವರು ಈ ಟೂರ್ನಿಯಲ್ಲಿ ಆಡಲಿದ್ದಾರೆ. ಅವರು ಮೊದಲ ಪಂದ್ಯದಲ್ಲಿ ಮಲೇಷ್ಯಾದ ಚಾಂಗ್ ವೀ ಫೆಂಗ್ ವಿರುದ್ಧ ಸೆಣಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT