ನಗರದ ರೋಟರಿ ಬಾಲಭವನದಲ್ಲಿ ಸೋಮವಾರ ನಡೆದ ಸ್ವರಾಜ್ ಇಂಡಿಯಾ ಜಿಲ್ಲಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಜಾತಿ–ಜನಾಂಗಗಳು, ಧರ್ಮಗಳು, ರಾಜ್ಯ–ರಾಜ್ಯಗಳ ನಡುವೆ ವಿವಾದಗಳ ಬೆಂಕಿ ಹಚ್ಚಲಾಗುತ್ತಿದೆ. ಈ ಮೂಲಕ ಭ್ರಷ್ಟಾಚಾರ, ಹಗರಣಗಳನ್ನು ಮರೆಗೆ ಸರಿಸಿ ಜನರ ಗಮನವನ್ನು ಭಾವನಾತ್ಮಕವಾಗಿ ಸೆಳೆಯಲಾಗುತ್ತಿದೆ’ ಎಂದು ಟೀಕಿಸಿದರು.