2014ರ ಲೋಕಸಭಾ ಚುನಾವಣೆಯಲ್ಲಿ ಮುಲಾಯಂ ಸಿಂಗ್ ಯಾದವ್, ಅಜಂಗಡ ಮತ್ತು ಮೈನ್ಪುರಿ ಕ್ಷೇತ್ರಗಳಿಂದ ಸ್ಪರ್ಧಿಸಿ, ಎರಡರಲ್ಲೂ ಜಯ ಸಾಧಿಸಿದ್ದರು. ಆದರೆ, ನಂತರ ಅಜಂಘಡ ಕ್ಷೇತ್ರ ಉಳಿಸಿಕೊಂಡು ಮೈನ್ಪುರಿ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮುಲಾಯಂ ಮೊಮ್ಮಗ ತೇಜ್ ಪ್ರತಾಪ್ ಯಾದವ್ ಜಯಗಳಿಸಿದ್ದರು.