‘ಬಾಹುಬಲಿ ಬಗ್ಗೆ ಮಹಾಕಾವ್ಯ ಬರೆಯುವಂತೆ ಚಾರುಕೀರ್ತಿ ಭಟ್ಟಾರಕರು ಸಲಹೆ ನೀಡಿದ್ದರು. ಮಹಾಮಸ್ತಕಾಭಿಷೇಕದ ವೇಳೆಗೆ ಬಿಡುಗಡೆಗೆ ಸಿದ್ಧಪಡಿಸುವಂತೆಯೂ ಗಡುವು ನೀಡಿದ್ದರು. ಇದು ನನ್ನಿಂದ ಆಗುವುದಿಲ್ಲವೆಂದು ಆರಂಭದಲ್ಲಿ ಒಪ್ಪಿಕೊಳ್ಳಲು ಅಳುಕಿದ್ದೆ. ಸ್ವಾಮೀಜಿಯವರ ಒತ್ತಾಸೆಗೆ ಮಣಿದು 2014ರಲ್ಲಿ ಮಹಾಕಾವ್ಯ ರಚನೆ ಆರಂಭಿಸಿದೆ. ಮೂರು ತಿಂಗಳ ಹಿಂದೆ ಪೂರ್ಣಗೊಳಿಸಿದ್ದೇನೆ’ ಎಂದು ತಿಳಿಸಿದರು.