ಚಿತ್ರದುರ್ಗ: ಕಟುಕ ರಾಜಕಾರಣಕ್ಕಿಂತ ನಾಡನ್ನು, ಮನಸ್ಸುಗಳನ್ನು 'ಕಟ್ಟು'ವಂಥಹ ರಾಜಕಾರಣ ಇಂದಿನ ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷೀಯ ಮಂಡಳಿ ಸದಸ್ಯ ದೇವನೂರು ಮಹದೇವ ಪ್ರತಿಪಾದಿಸಿದರು.
ಪಕ್ಷದ ಜಿಲ್ಲಾ ಘಟಕದ ಉದ್ಘಾಟನೆಯಲ್ಲಿ ಆಶಯ ಭಾಷಣ ಮಾಡಿದ ಅವರು, 'ಕಟುಕ ಮತ್ತು ಸರ್ಜನ್ ಇಬ್ಬರೂ ಕತ್ತರಿಸುತ್ತಾರೆ. ಆದರೆ ಕಟುಕ ಜೀವ ಕೊಲ್ಲುತ್ತಾನೆ, ಸರ್ಜನ್ ಜೀವ ಉಳಿಸಲು ಕತ್ತರಿಸುತ್ತಾನೆ. ನಮಗೆ ಇವತ್ತು ಸರ್ಜನ್ ರಾಜಕಾರಣದ ಅನಿವಾರ್ಯತೆಇದೆ.
ಅಂಥ ರಾಜಕಾರಣಕ್ಕಾಗಿಯೇ ಸ್ವರಾಜ್ ಇಂಡಿಯಾ ಪಕ್ಷ ಉದಯಿಸಿದೆ' ಎಂದರು.