ಕೆರೆಯೇ ಕಾರಣ: ಗ್ರಾಮಕ್ಕೆ ಅಂಟಿಕೊಂಡಿರುವ ವಿಠಲಾಪುರ–ಹಾವಿನಮಡಗು ಕೆರೆ ಸುಮಾರು 700 ಎಕರೆ ಪ್ರದೇಶವನ್ನು ಹೊಂದಿದ್ದು, ಅಲ್ಲಿ ಮಳೆ ಇಲ್ಲದೆ ಜಾಲಿ ಮುಳ್ಳಿನ ಗಿಡಗಳ ಪೊದೆಗಳು ಹರಡಿವೆ. ಈ ಪೊದೆಗಳಲ್ಲಿ ಚಿರತೆ, ಕರಡಿ, ಹಂದಿ ಮೊದಲಾದ ಕಾಡು ಪ್ರಾಣಿಗಳಿಗೆ ಆಶ್ರಯ ಪಡೆದಿವೆ. ಕೆರೆಯ ಕಡೆಗೆ ಮೇಯಲು ಹೋದ ಅಥವಾ ರೈತರು ತಮ್ಮ ಮನೆಯ ಬಳಿ ಕಟ್ಟಿಹಾಕುವ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.