ಸ್ಪೋರ್ಟ್ಸ್ ಪೆವಿಲಿಯನ್ನಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೈಸೂರು ವಿ.ವಿ ತಂಡ 17–15 ರಲ್ಲಿ ಕಳೆದ ಬಾರಿಯ ‘ರನ್ನರ್ ಅಪ್’ ಮುಂಬೈ ವಿ.ವಿ ವಿರುದ್ಧ ರೋಚಕ ಜಯ ಸಾಧಿಸಿತು. ಮೂರು ನಿಮಿಷ ಆಡಿದ್ದಲ್ಲದೆ, ನಾಲ್ಕು ಪಾಯಿಂಟ್ ಕಲೆಹಾಕಿದ ಎಚ್.ಆರ್.ಮನು ಮತ್ತು ಮೂರು ಪಾಯಿಂಟ್ ಸಂಗ್ರಹಿಸಿದ ಕೃಷ್ಣ ಅವರು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.