ಸ್ಥಳೀಯ ರೈತರು ಜೆಸಿಬಿಯಿಂದ ಗದ್ದೆಯನ್ನು ಸಮತಟ್ಟು ಮಾಡಿಸುವಾಗ ಈ ರಚನೆ ಪತ್ತೆಯಾಗಿದೆ. ತಕ್ಷಣ ಕೆಲಸ ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಬೃಹತ್ ಇಟ್ಟಿಗೆಗಳು ಕಂಡುಬಂದಿವೆ. ಮೊದಲು ಇದು ಯಜ್ಞಕುಂಡ ಎಂದೂ ಭಾವಿಸಲಾಗಿತ್ತು. ನಂತರ ಪ್ರಾಕ್ತನ ಶಾಸ್ತ್ರಜ್ಞರಾದ ಕೇಶವ ತಿರುಮಲೈ ಅವರು, ‘ಪತ್ತೆಯಾಗಿರುವ ರಚನೆಯು ಕದಂಬರ ಕಾಲದ ಕುಂಬಾರನ ಕುಲುಮೆ ಆಗಿರಬಹುದು’ ಎಂದು ಅಂದಾಜಿಸಿದ್ದಾರೆ.