ಶಾಸಕ ಎನ್. ಚಲುವರಾಯಸ್ವಾಮಿ ಮಾತನಾಡಿ, ‘ವಿರೋಧಿಗಳು ಮಾಡುತ್ತಿರುವ ತಂತ್ರಕ್ಕೆ ಪತ್ರಿತಂತ್ರವನ್ನು ಹೆಣೆಯುವ ಸಲುವಾಗಿ ಜಮೀರ್ ಅಹಮದ್ ತಾಲ್ಲೂಕಿಗೆ ಭೇಟಿ ನೀಡಿದ್ದಾರೆ. ಈ ಕ್ಷೇತ್ರದ ಚುನಾವಣೆ ರಾಜ್ಯಕ್ಕೆ ವಿಶೇಷವಾದದ್ದು. ನಾವು 7 ಜನ ಬಂಡಾಯ ಶಾಸಕರಿಗೆ ಇದು ಅತ್ಯಂತ ಪ್ರಮುಖವಾದ ಚುನಾವಣೆ’ ಎಂದರು. ಪಟ್ಟಣ ಪಂಚಾಯಿತಿ ನೂರ್ ಅಹಮದ್, ಸ್ಟಾರ್ ಪೌಲ್ಟ್ರಿ ಫಾರಂನ ಮುರ್ತುಝಾ, ಮಹಮದ್ ಸೆಮಿ ಇದ್ದರು.