‘ನವಣೆ, ಶ್ಯಾವಿ ಹಿಟ್ಟು, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ, ಜೀರಿಗೆ ಬಳಸಿ ಸಿರಿಧಾನ್ಯಗಳ ಸೂಪ್(ಗಂಜಿ) ತಯಾರಿಸಲಾಗಿದೆ. ಸಾಹಿತ್ಯ ಆಸಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬರುವ ದಿನಗಳಲ್ಲಿ ನಗರದಲ್ಲಿ ಸಿರಿಧಾನ್ಯಗಳ ಸೂಪ್(ಗಂಜಿ) ಮಳಿಗೆ ತೆರೆಯುವ ಉದ್ದೇಶ ಇದೆ’ ಎಂದು ದಕ್ಷಿಣ ಭಾರತ ನೈಸರ್ಗಿಕ ರೈತ ಉತ್ಪಾದನಾ ಕಂಪನಿ ನಿಯಮಿತದ ಸಂಗಪ್ಪ ಹಿಪ್ಪಳಗಾಂವ್ ತಿಳಿಸಿದರು.