<p><strong>ಮಲ್ಲಿಕಾರ್ಜುನ ಕಲಮರಹಳ್ಳಿ</strong></p>.<p>ಹೋಗವ್ವ ತಾಯೆ ಗುನಿಡೆಂಗಿಮಾಯೆ<br /> ಯಾತಕ್ಕೆ ಬಂದೇಳು ನಮ್ಮೂರ ಮ್ಯಾಲೆ |ಪಲ್ಲವಿ|</p>.<p>1<br /> ಊರೂರು ಸುತ್ತಿ ಸುತ್ತಿ ಕೇರಿ ಕೇರಿಗೆ ಬಂದೆ<br /> ಹೆಣ್ಣೆಂಬ ಮನವಿಲ್ಲ ಗಂಡೆಂಬ ಸೊಲ್ಲಿಲ್ಲ<br /> ಎಳೆ ಬಾಲ ವೃದ್ಧರ ಹೆಡೆಮುರಿ ಬಿಗಿದೆ<br /> ಮನೆ ಮಂದೀನೆಲ್ಲ ಮೂಲೆ ಮಡುಕಟ್ಟಿದೆ ||</p>.<p>2<br /> ಮೈಮನದೊಳಗೆ ಆವುಗೆ ಧಗೆಯು<br /> ಕೀಲು ಮಂಡೀಲಿ ಚೇಳಿನ ಕುಟುಕು<br /> ನರನಾಡಿ ತುಂಬೆಲ್ಲ ನೆಗ್ಗಿಲ ಮುಳ್ಳು<br /> ಲಾವಾರಸದೊಳಗೆ ಹಗಲಿರುಳ ಉಸಿರು ||</p>.<p>3<br /> ಹಾದೀಗೆ ಹಂದರ ಬೀದೀಗೆ ತೋರಣ<br /> ಪಲ್ಲಕ್ಕಿಯೊಳಗೆ ಕೂತವಳೆ ಕೀಲವ್ವ<br /> ಎಡೆಯಿಟ್ಟಿವೋ ನಾವು ಮುಡಿ ಕೊಟ್ಟೆವೋ<br /> ಏಳೂರ ವಾಲಗ ಅಬ್ಬರಿಸಿ ಬೊಬ್ಬಿರಿದವೋ ||</p>.<p>4<br /> ಓ ಲಿಂಗಾ, ಮಾಲಿಂಗಾ, ಶಿವಚಿತ್ತರು ಲಿಂಗಾ<br /> ಮುಂಗಾರಿನೊಳಗೆ ಹೊನ್ನಾರು ಹೂಡಲು<br /> ನಿಂತನಡುವಲ್ಲಿ ಕಸುವಿಲ್ಲವೋ ಹರನೇ<br /> ಸೋತು ಸುಣ್ಣಾಗಿ ಮನಸಿಲ್ಲವೋ ಶಿವನೇ ||</p>.<p>5<br /> ಗಣ ದನಿಯು ಮಲಗಿ ಸಿರಿಪದವು ಸೊರಗಿ<br /> ಮೈಲಾರ ಮಾತು ಮುಗಿಲಾಗೆ ಮರೆಯಾಗಿ<br /> ಮಲೆ ಮಾದನೆಲ್ಲೋ ಮಂಟಯ್ಯನೆಲ್ಲೋ<br /> ಗಾದರಿಪಾಲನೇ ನಿಂತ್ಯಾಕೆ ಗಾವುದೂರಾ ||</p>.<p>6<br /> ಗುನಿಮಾರಿ ಸಂತೇಲಿ ಸಿಕ್ಕಿದ್ದೇ ಸೀರುಂಡೆ<br /> ಮದ್ದೀನ ಮನೆಯಲ್ಲಿ ಕಾಂಚಾಣ ತಾನಾನ<br /> ಉಪ್ಪರಿಗೆ ಮಹಲಲ್ಲಿ ಸೋಯೆಂಬ ಸೋಬಾನ<br /> ನಾಡದೊರೆಯೇ ನಿದ್ದೆಗೆಟ್ಟು ನಡೆದಾಡು<br /> ಗುನಿಡೆಂಗಿ ಮಾರಿಯರ ಮುಗಿಲಾಚೆ ನೂಕು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಮಲ್ಲಿಕಾರ್ಜುನ ಕಲಮರಹಳ್ಳಿ</strong></p>.<p>ಹೋಗವ್ವ ತಾಯೆ ಗುನಿಡೆಂಗಿಮಾಯೆ<br /> ಯಾತಕ್ಕೆ ಬಂದೇಳು ನಮ್ಮೂರ ಮ್ಯಾಲೆ |ಪಲ್ಲವಿ|</p>.<p>1<br /> ಊರೂರು ಸುತ್ತಿ ಸುತ್ತಿ ಕೇರಿ ಕೇರಿಗೆ ಬಂದೆ<br /> ಹೆಣ್ಣೆಂಬ ಮನವಿಲ್ಲ ಗಂಡೆಂಬ ಸೊಲ್ಲಿಲ್ಲ<br /> ಎಳೆ ಬಾಲ ವೃದ್ಧರ ಹೆಡೆಮುರಿ ಬಿಗಿದೆ<br /> ಮನೆ ಮಂದೀನೆಲ್ಲ ಮೂಲೆ ಮಡುಕಟ್ಟಿದೆ ||</p>.<p>2<br /> ಮೈಮನದೊಳಗೆ ಆವುಗೆ ಧಗೆಯು<br /> ಕೀಲು ಮಂಡೀಲಿ ಚೇಳಿನ ಕುಟುಕು<br /> ನರನಾಡಿ ತುಂಬೆಲ್ಲ ನೆಗ್ಗಿಲ ಮುಳ್ಳು<br /> ಲಾವಾರಸದೊಳಗೆ ಹಗಲಿರುಳ ಉಸಿರು ||</p>.<p>3<br /> ಹಾದೀಗೆ ಹಂದರ ಬೀದೀಗೆ ತೋರಣ<br /> ಪಲ್ಲಕ್ಕಿಯೊಳಗೆ ಕೂತವಳೆ ಕೀಲವ್ವ<br /> ಎಡೆಯಿಟ್ಟಿವೋ ನಾವು ಮುಡಿ ಕೊಟ್ಟೆವೋ<br /> ಏಳೂರ ವಾಲಗ ಅಬ್ಬರಿಸಿ ಬೊಬ್ಬಿರಿದವೋ ||</p>.<p>4<br /> ಓ ಲಿಂಗಾ, ಮಾಲಿಂಗಾ, ಶಿವಚಿತ್ತರು ಲಿಂಗಾ<br /> ಮುಂಗಾರಿನೊಳಗೆ ಹೊನ್ನಾರು ಹೂಡಲು<br /> ನಿಂತನಡುವಲ್ಲಿ ಕಸುವಿಲ್ಲವೋ ಹರನೇ<br /> ಸೋತು ಸುಣ್ಣಾಗಿ ಮನಸಿಲ್ಲವೋ ಶಿವನೇ ||</p>.<p>5<br /> ಗಣ ದನಿಯು ಮಲಗಿ ಸಿರಿಪದವು ಸೊರಗಿ<br /> ಮೈಲಾರ ಮಾತು ಮುಗಿಲಾಗೆ ಮರೆಯಾಗಿ<br /> ಮಲೆ ಮಾದನೆಲ್ಲೋ ಮಂಟಯ್ಯನೆಲ್ಲೋ<br /> ಗಾದರಿಪಾಲನೇ ನಿಂತ್ಯಾಕೆ ಗಾವುದೂರಾ ||</p>.<p>6<br /> ಗುನಿಮಾರಿ ಸಂತೇಲಿ ಸಿಕ್ಕಿದ್ದೇ ಸೀರುಂಡೆ<br /> ಮದ್ದೀನ ಮನೆಯಲ್ಲಿ ಕಾಂಚಾಣ ತಾನಾನ<br /> ಉಪ್ಪರಿಗೆ ಮಹಲಲ್ಲಿ ಸೋಯೆಂಬ ಸೋಬಾನ<br /> ನಾಡದೊರೆಯೇ ನಿದ್ದೆಗೆಟ್ಟು ನಡೆದಾಡು<br /> ಗುನಿಡೆಂಗಿ ಮಾರಿಯರ ಮುಗಿಲಾಚೆ ನೂಕು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>