‘ರಾಜ್ಯ ಸರ್ಕಾರ ನೆರವು ಕೇಳಿದರೆ ಎಡಗೈಯಲ್ಲಿ ನೆರವು ನೀಡುತ್ತೇನೆ ಎಂದು ಹೇಳಿಕೆ ನೀಡಿರುವ ಜನಾರ್ದನರೆಡ್ಡಿ ಅವರು ಬಲಗೈಯಿಂದ ಪಕ್ಷದ ಮುಖಂಡರಿಗೆ ಎಷ್ಟು ಜಣ ನೀಡಿದ್ದಾರೆ ಎಂಬುದನ್ನೂ ಬಹಿರಂಗಪಡಿಸಬೇಕು. ರೆಡ್ಡಿ ಅವರನ್ನು ಬಿಜೆಪಿ ಮುಖಂಡ ಎಂದೇ ಇಂದಿಗೂ ಜಿಲ್ಲೆಯಲ್ಲಿ ಆ ಪಕ್ಷದ ಮಂದಿ ಕರೆಯುತ್ತಿದ್ದಾರೆ. ಹಾಗೆ ಅವರನ್ನು ಪರಿಗಣಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ಶಾ ಮತ್ತು ಪ್ರಧಾನಿ ಅನುಮತಿ ನೀಡಿದ್ದಾರೆಯೇ’ ಎಂದು ಪ್ರಶ್ನಿಸಿದರು. ’ಬರಲಿರುವ ವಿಧಾನಸಭೆ ಚುನಾವಣೆಲ್ಲಿ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿರುವೆ’ ಎಂದು ತಿಳಿಸಿದರು.