ನಗರದ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆಯ ಮೂಲಕ ಸಾಗಿದ ಸಮಾಜದವರು ಅವಹೇಳನ ಮಾಡಿದ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಭೀಮಸೇನರಾವ್ ಬನ್ನಿಗೋಳ, ಅನಂತಾಚಾರ್ ಕಾಶಿ, ಪ್ರಮೋದ ಕುಲಕರ್ಣಿ, ವೇಣುಗೋಪಾಲ ಜಾಗೀರದಾರ ನೇತೃತ್ವ ವಹಿಸಿದ್ದರು.