ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹಜ್ಭವನಕ್ಕೆ ಟಿಪ್ಪು ಹೆಸರಿಡುವ ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟಿದ್ದು ಇದಕ್ಕೆ ಕೆಲವು ರಾಜಕೀಯ ಮುಖಂಡರು ವಿರೋಧ ವ್ಯಕ್ತಪಡಿಸಿರುವುದು ವರದಿಯಾಗಿದೆ.
ಹಜ್ ಭವನವೇನೂ ಹಿಂದೂಗಳದ್ದಲ್ಲವಲ್ಲ. ಹೀಗಿರುವಾಗ ಇಂಥದ್ದೇ ಹೆಸರಿಡಿ ಎಂದು ಹೇಳಲು ನಾವ್ಯಾರು?
ತಮಗೆ ಹುಟ್ಟಿದ ಮಕ್ಕಳಿಗೆ, ತಮಗೆ ಬೇಕಾದ ಹೆಸರಿಟ್ಟುಕೊಳ್ಳಲಿ ಬಿಡಿ. ಅದನ್ನು ಬೇರೆಯವರು ಯಾಕೆ ವಿರೋಧಿಸಬೇಕು? ರಾಜಕೀಯ ಧುರೀಣರು ಅಧಿಕಾರದಲ್ಲಿದ್ದಾಗ ಒಂದು ತರಹ, ಅಧಿಕಾರ ಕಳೆದುಕೊಂಡ ನಂತರ ಇನ್ನೊಂದು ತರಹ ಆಡುವ ವಿಚಾರ ಜನರಿಗೆ ತಿಳಿಯದ ವಿಷಯವೇನಲ್ಲ.