ಅಷ್ಟರಲ್ಲಿ ನಗರಸಭೆ ಸಿಬ್ಬಂದಿ ಕಳೆದ ವರ್ಷದ ಮುಂಗಡಪತ್ರ ತಂದು ಜನರ ಕೈಗಿತ್ತರು. ಅದರಲ್ಲಿ ಹೋದ ವರ್ಷ ಸಂಗ್ರಹವಾಗಿದ್ದ ಆದಾಯದಲ್ಲಿ ಅರ್ಧದಷ್ಟನ್ನೂ ನಗರಸಭೆ ಖರ್ಚು ಮಾಡಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಜನರು, ‘ರೀ, ಪೌರಾಯುಕ್ತರೆ, ನಿಮ್ ಹಣೆಬರಹರಕ್ಕೆ ನಗರದಲ್ಲಿನ ಮೋರಿ ಕ್ಲೀನ್ ಮಾಡ್ಸಿ ಅಷ್ಟೇ ಸಾಕು!’ ಎನ್ನುತ್ತಿದ್ದಂತೆ ಪೌರಾಯುಕ್ತರ ಮುಖ ಹುಳ್ಳಗಾಯಿತು.