ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಬಂದ ದಿನ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಟ್ವಿಟರ್ ಸಮರ ಹೆಚ್ಚಾಗಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮೂಲಕ ಬಿಜೆಪಿಗೆ ಪಾಠ ಮಾಡಿದ್ದಾರೆ.
ಕರ್ನಾಟಕ ಬಿಜೆಪಿ ಈ ಅಂಶಗಳನ್ನು ಪ್ರಧಾನಿಗೆ ತಿಳಸಬೇಕು ಎಂದು ಹೇಳಿ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಭಾರತ ಹೂಡಿಕೆ ಯೋಜನೆಗಳಲ್ಲಿ ಶೇ44ರಷ್ಟು ಹಣವನ್ನು ಕರ್ನಾಟಕ ಹೊಂದಿದೆ. ಇವು ಯೂನಿಯನ್ ವಾಣಿಜ್ಯ ಮತ್ತು ಉದ್ಯಮ ಇಲಾಖೆಯ ಅಂಕಿ ಅಂಶ ಎಂದು ಹೇಳಿದ್ದಾರೆ.