ಯೋಗ ಗುರು ಬಾಬಾ ರಾಮದೇವ್ ಅವರು ಬೆಳಿಗ್ಗೆ ಸುಮಾರು 5ಗಂಟೆಯಿಂದ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು. ನಿತ್ಯ ಯೋಗ ಮಾಡುವುದರಿಂದ ರಕ್ತದೊತ್ತಡ, ಮಧುಮೇಹ, ಖಿನ್ನತೆ, ತಲೆನೋವು, ಥೈರಾಯಿಡ್, ಹೃದಯ, ಕಿಡ್ನಿ, ಜೀರ್ಣಾಂಗ ಅಂಗಗಳು, ಮೆದುಳು ಜ್ವರ, ಮೊಣಕಾಲು, ಕೀಲುಗಳ ಶಸ್ತ್ರ ಚಿಕಿತ್ಸೆ ತಡೆಗಟ್ಟಬಹುದು. ಇದೇ ವೇಳೆಯಲ್ಲಿ ಆಯುರ್ವೇದ ಮತ್ತು ಮನೆ ಔಷಧಿಗಳಿಂದ ಉಂಟಾಗುವ ಲಾಭದ ಕುರಿತು ಶಿಬಿರಾರ್ಥಿಗಳಿಗೆ ತಿಳಿಸಿದರು.