ಹೌದು, ಗಿರಿಕಂದರಗಳ ಮೇಲಿರುವ ರಾಜಾಸೀಟ್ಗೆ ಸಾವಿರಾರು ಮಂದಿ ಪ್ರವಾಸಿಗರು ದಿನಂಪ್ರತಿ ಭೇಟಿ ನೀಡುತ್ತಿದ್ದರೂ, ಹಿಂದಿನ ಆಕರ್ಷಣೆ ಉಳಿದಿಲ್ಲ. ಅದರ ಮೇಲೆ ‘ಕಿಡಿ’ಗೇಡಿಗಳ ಕಣ್ಣುಬಿದ್ದಿದೆ. ಬಂದವರೂ ಅಲ್ಲಿನ ಪರಿಸರದ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಪದೇ ಪದೇ ಬೆಂಕಿ ಅವಘಡ ಸಂಭವಿಸುತ್ತಿರುವ ಕಾರಣ ಅದರ ಸೌಂದರ್ಯ ಕರಗುತ್ತಿದೆ. ಉದ್ಯಾನಕ್ಕೆ ಹೊಂದಿಕೊಂಡಿರುವ ಅರಣ್ಯದಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಬರೀ ಬೆಟ್ಟ ಮಾತ್ರ ಗೋಚರಿಸುತ್ತಿದೆ. ಉದ್ಯಾನದ ಸೊಬಗು ದಿನಂಪ್ರತಿ ಮಾಸುತ್ತಿದ್ದು, ಅದನ್ನು ‘ಪ್ರಜಾವಾಣಿ’ ದೃಶ್ಯಗಳ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದೆ.