ನವದೆಹಲಿ: ‘ದೇಶ ವಿಭಜನೆಗೆ ಕಾರಣವಾದ ಕಾಂಗ್ರೆಸ್ ಪಕ್ಷ ಬಿತ್ತಿದ ವಿಷಬೀಜ 70 ವರ್ಷಗಳ ನಂತರವೂ ಈ ದೇಶದ ಜನ ನರಳುವಂತೆ ಮಾಡಿದೆ. ಒಂದು ಕುಟುಂಬದ ಒಳಿತಿಗಾಗಿ ಭಾರತ ಮಾತೆಯನ್ನೇ ಛಿದ್ರಗೊಳಿಸಿದವರು ಜನರ ಆಶೋತ್ತರಗಳಿಗೆ ಸ್ಪಂದಿಸದೆ, ಸ್ವಾರ್ಥ ಸಾಧನೆಯನ್ನೇ ಮುಖ್ಯವಾಗಿಸಿಕೊಂಡರು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.