ಪಾವಗಡ: ತಾಲ್ಲೂಕಿನ ರಂಗಸಮುದ್ರದ ತಿಪ್ಪೇರುದ್ರಸ್ವಾಮಿ ದೇಗುಲದಲ್ಲಿ ಜಾತ್ರೆ ಪ್ರಯುಕ್ತ ವಿತರಿಸಿದ್ದ ಪ್ರಸಾದ ಸೇವಿಸಿ 230ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಗ್ರಾಮದಲ್ಲಿ ಮಂಗಳವಾರ ಸಂಜೆ ಜಾತ್ರೆಯ ಕಡೆ ದಿನವಾಗಿದ್ದರಿಂದ ಸುಮಾರು 300 ಭಕ್ತರಿಗೆ ದೇಗುಲದಲ್ಲಿ ಪುಳಿಯೊಗರೆ, ಮೊಸರನ್ನವನ್ನು ವಿತರಿಸಲಾಗಿತ್ತು.