ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶೀಲಾ ಮಾತನಾಡಿ, ಮಹಿಳೆಯ ರಕ್ಷಣೆಗಾಗಿ ಹಲವು ಕಾನೂನುಗಳಿದ್ದು, ಅದರ ಬಗ್ಗೆ ಅರಿವು ಹೊಂದಬೇಕು ಎಂದು ತಿಳಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚು ಬರುತ್ತಿದೆ. ಇದಕ್ಕೆ ಗಂಡ–ಹೆಂಡತಿಯ ನಡುವೆ ಸಾಮರಸ್ಯದ ಕೊರತೆ ಕಾರಣ. ಆದ್ದರಿಂದ ಜೀವನದಲ್ಲಿ ಪರಸ್ಪರ ಅರಿತು ಬಾಳಬೇಕು ಎಂದರು.