ಫೆ. 3 ರಂದು ಸಂಜೆ ಹರತಿ ವೀರಭದ್ರಸ್ವಾಮಿ ಮತ್ತು ಆದಿರಾಳು ಗ್ರಾಮದ ರಾಜಾ ವೀರಾಂಜನೇಯಸ್ವಾಮಿ ದೇವರ ಮೂರ್ತಿಗಳನ್ನು ಗ್ರಾಮಕ್ಕೆ ಕರೆತರಲಾಗಿತ್ತು. ಫೆ. 4ರಂದು ಗಂಗಾಪೂಜೆ, ಕೇಲು ಪ್ರತಿಷ್ಠಾಪನೆ, ವಿಗ್ರಹ ಪ್ರಾಣಪ್ರತಿಷ್ಠಾಪನೆ, ಪುಣ್ಯಾಹ, ನವಗ್ರಹ ಪೂಜೆ, ಹೋಮ ನಡೆಸಲಾಗಿತ್ತು. ಫೆ. 5ರಂದು ಹೋಮ, ಪರಿವಾರ ದೇವತಾ ಹೋಮ, ಮಹಾಪೂರ್ಣಾಹುತಿ, ಕಳಸಾಭಿಷೇಕ, ಪಂಚಾಮೃತ ಅಭಿಷೇಕ, ಫೆ. 6ರಂದು ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದವು. ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸ್ವಾಮಿಯ ಉತ್ಸವ ನೆರವೇರಿತು ಎಂದು ಗ್ರಾಮದ ಮುಖಂಡ ಬದ್ರಿ ತಿಳಿಸಿದರು.