ನಂದ್ಯಾಳದ ರೆಬಿಕಾ ಯೇಶಪ್ಪ ತಮ್ಮ ಅತ್ತೆ ಮತ್ತು ಮಕ್ಕಳ ಜೊತೆ ಹೊಲದಲ್ಲಿ ಕೆಲಸ ಮುಗಿಸಿ ವಾಪಸ್ ಮನೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಹಿರಿಯ ಪುತ್ರ ವಿಲ್ಸನ್ ಕಾಲು ಜಾರಿ ಬ್ಯಾರೇಜ್ನಲ್ಲಿ ಬಿದ್ದಿದ್ದಾನೆ. ಆಗ ರೆಬಿಕಾ ಮತ್ತೊಬ್ಬ ಮಗನೊಂದಿಗೆ ಆತನನ್ನು ರಕ್ಷಿಸಲು ಹೋದಾಗ ಈ ಅವಘಡ ಸಂಭವಿಸಿದೆ. ಪೊಲೀಸರು ಗ್ರಾಮಸ್ಥರ ಸಹಾಯದಿಂದ ತಡರಾತ್ರಿ ವರೆಗೆ ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರಕ್ಕೆ ತೆಗೆದರು.