ಸಿ.ಎಸ್. ಪುಟ್ಟರಾಜುಗೆ ಜನರ ಮೇಲೆ ಕಳಕಳಿ ಇದೆ. ನಾನು ಇದನ್ನು ಹತ್ತಿರದಿಂದ ಬಲ್ಲೆ. ಅವರನ್ನು ಗೆಲ್ಲಿಸಿಕೊಡಿ’ ಎಂದು ಕೋರಿದರು. ಮುಖಂಡ ಎಚ್.ವಿಶ್ವನಾಥ್ ಅವರು, ‘ರೆಡ್ಡಿ ಗಣಿದಣಿಗಳ ವಿರುದ್ಧ 330 ಕಿ.ಮೀ ಕಾಲ್ನಡಿಗೆ ಜಾಥಾ ಮಾಡಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಭ್ರಷ್ಟಾಚಾರ ಹೊದ್ದುಮಲಗಿದ್ದಾರೆ’ ಎಂದು ಆರೋಪಿಸಿದರು. ಲೋಕಾಯುಕ್ತ ವ್ಯವಸ್ಥೆಗೆ ಬಲ ನೀಡುವ ಬದಲು ಎಸಿಬಿ ಜಾರಿಗೆ ತಂದು ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು.