ತ್ರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ಮಾತನಾಡಿ, ‘ಅನಾದಿ ಕಾಲದಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ಮನೆಗೆ ಬೇಕಾದ ಸೊಪ್ಪು ತರಕಾರಿಗಳನ್ನು ಮನೆಯಂಗಳದಲ್ಲಿಯೇ ಬೆಳೆಯುವ ಪದ್ಧತಿಯಿತ್ತು. ಆದರೆ, ನಾಡೆಲ್ಲವೂ ಕಾಂಕ್ರೀಟೀಕರಣಗೊಂಡ ನಂತರ ಭೂಮಿಯ ಕೊರತೆಯಿಂದ, ತಾರಸಿ ಬೆಳೆಯ ಬಳಕೆ ಜಾರಿಗೆ ಬಂದಿದ್ದು, ತಾರಸಿ ಬೆಳೆಯು ಪಟ್ಟಣದಲ್ಲಿ ಹೆಚ್ಚು ಉಪಯುಕ್ತವಾಗಿದೆ. ತರಕಾರಿಗಳನ್ನು ಬೆಳೆಯಲು ಜಾಗವಿಲ್ಲ ಎಂಬ ಧೋರಣೆಯನ್ನು ಕೈಬಿಟ್ಟು, ಮನೆಯ ತಾರಸಿಯಲ್ಲಿಯೇ ಅಗತ್ಯ ವಸ್ತುಗಳನ್ನು ಬೆಳೆಯಬೇಕು’ ಎಂದರು.