ವಿದ್ಯಾನಗರ–ಲೋಕಪ್ಪನಹಕ್ಕಲು ಮುಖ್ಯ ರಸ್ತೆಗೆ ಸಂಪರ್ಕಿಸುವ ಅಡ್ಡ ರಸ್ತೆಗಳ ಬಳಿ ಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ಈ ಭಾಗದ ನಿವಾಸಿಗಳು ತಮ್ಮ ವಾಹನಗಳನ್ನು ಸುತ್ತಿಬಳಸಿಕೊಂಡು ಮನೆ ಬಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಆಜುಬಾಜು ಮಣ್ಣು, ಕಲ್ಲು, ಜಲ್ಲಿಯ ರಾಶಿ ಹಾಕಿರುವುದರಿಂದ ಪಾದಾಚಾರಿಗಳು ನಡೆದಾಡಲು ಸಮಸ್ಯೆಯಾಗಿದೆ.