ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತಮ ಫಲಿತಾಂಶಕ್ಕೆ ಸಂಕಲ್ಪ ಮಾಡಿ’

Last Updated 10 ಫೆಬ್ರುವರಿ 2018, 10:11 IST
ಅಕ್ಷರ ಗಾತ್ರ

ಹನುಮಸಾಗರ: ಶಾಲೆಯ ಉತ್ತಮ ಫಲಿತಾಂಶಕ್ಕೆ ಶಿಕ್ಷಕರ ಸಂಕಲ್ಪ ಅವಶ್ಯ ಎಂದು ಶಾಲಾ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಚಂದ್ರಶೇಖರಯ್ಯಸ್ವಾಮಿ ಹಿರೇಮಠ ಹೇಳಿದರು.

ಸಮೀಪದ ಮುದೇನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ವತಿಯಿಂದ ಶಾಲೆಯ ಉತ್ತಮ ಫಲಿತಾಂಶಕ್ಕೆ ಕಾರಣರಾದ ಶಿಕ್ಷಕ ಚಿದಾನಂದ ಕಸ್ತೂರಿ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.

ಮುಖ್ಯಶಿಕ್ಷಕ ಬಿ.ವಿ.ಮೇಟಿ ಮಾತನಾಡಿದರು. ಮುದೇನೂರ ಸಿದ್ಧಲಿಂಗಶ್ರೀ ಆಶೀರ್ವಚನ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಚೇತನಕುಮಾರ ಹಿರೇಮಠ, ಪ್ರಮುಖರಾದ ಮಹಹಾಂತೇಶ ವಸ್ತ್ರದ, ಮಲ್ಲಪ್ಪ, ಗುರುರಾಜ, ಶಿಲ್ಪಾ ತಿಮ್ಮಾಪೂರ, ಪುತ್ರಪ್ಪ ಹಡಪದ, ಸುರೇಶ ಪಾಟೀಲ, ಚಂದ್ರಶೇಖರ ಕುಂಬಾರ, ಹುಸೇನಪ್ಪ ಹಿರೇಮನಿ, ನಬಿಸಾಬ ಲಾಠಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT