ಮುಂದಿನ ಪೀಳಿಗೆಗೆ ಈಗಿನಿಂದಲೇ ನೀರಿನ ಮಹತ್ವ, ಅದರ ಕೊರತೆಯಿಂದಾಗುವ ಪರಿಣಾಮಗಳು, ಜತನದಿಂದ ಅದರ ಉಪಯೋಗಿಸುವಿಕೆ ಬಗ್ಗೆ ಮನ
ದಟ್ಟು ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲೂ ಇದೆ. ನಾವೇ ಮಾಡಿಕೊಂಡಿರುವ ಗಡಿರೇಖೆಗಳನ್ನು ಮೀರಿ, ಮನುಷ್ಯತ್ವದ ದೃಷ್ಟಿಯಿಂದ ಯಾರಿಗೂ ತೊಂದರೆಯಾಗದಂತೆ ನೀರನ್ನು ಸಮವಾಗಿ ಹಂಚಿಕೊಂಡರೆ ಎಷ್ಟೋ ಸಮಸ್ಯೆಗಳು ತಾವಾಗಿಯೇ ಬಗೆಹರಿಯಲಿವೆ.