ಗೋಕಾಕ: ಬಾಲಕನ ವಕ್ರವಾಗಿದ್ದ ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ಸಹಜಸ್ಥಿತಿಗೆ ತರುವಲ್ಲಿ ಇಲ್ಲಿನ ವೈದ್ಯರ ತಂಡ ಯಶಸ್ವಿಯಾಗಿದೆ. ಪಟ್ಟಣದ ಸಂಕೇಶ್ವರ–ನರಗುಂದ ರಾಜ್ಯ ಹೆದ್ದಾರಿಯಲ್ಲಿರುವ ಎಸ್–4 (ಸುಖ–ಶಾಂತಿ –ಸೂಪರ್–ಸ್ಪೆಷಾಲಿಟಿ) ಆಸ್ಪತ್ರೆಯ ಮೂಳೆ ತಜ್ಞರಾದ ಡಾ.ರಮೇಶ ಪಟಗುಂದಿ ಅವರು 17 ವರ್ಷ ವಯಸ್ಸಿನ ಯಲ್ಲಪ್ಪ ಕಲ್ಲಪ್ಪ ತೆಳಗಡೆ ಅವರ ವಕ್ರ ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ಸಹಜಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.