ನವದೆಹಲಿ: ಹೆದ್ದಾರಿಗಳಲ್ಲಿ ಹಸಿರು ಹೊದಿಕೆ ನಿರ್ವಹಣೆಯ ಮಾಹಿತಿ ಸಲ್ಲಿಸದ ಮತ್ತು ವಿವಿಧ ಯೋಜನೆಗಳಿಗೆ ಅಪಾರ ಸಂಖ್ಯೆಯ ಮರಗಳ ತೆರವಿಗೆ ಪ್ರಸ್ತಾವ ಸಲ್ಲಿಸಿರುವ ಕಾರಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಕರ್ನಾಟಕ, ಮಣಿಪುರ ರಾಜ್ಯಗಳನ್ನು ತೀವ್ರ ತರಾಟೆ ತೆಗೆದುಕೊಂಡಿದೆ. ಎರಡೂ ರಾಜ್ಯಗಳಿಗೂ ತಲಾ ₹50,000 ದಂಡ ವಿಧಿಸಿದೆ.