ಬೆಂಗಳೂರು– ಕಾರವಾರ ರೈಲು ಸ್ಥಳೀಯ ನಿಲ್ದಾಣದಿಂದ ಮಧ್ಯಾಹ್ನ 11.40ಕ್ಕೆ ನಿರ್ಗಮಿಸಿದ್ದು, ಯಡಕುಮೇರಿ ನಿಲ್ದಾಣ ದಾಟಿದ ಸ್ವಲ್ಪ ಸಮಯದಲ್ಲೇ ಬಂಡೆ ಉರುಳಿ ಬಿದ್ದಿದೆ. ಇದರಿಂದ ಮಧ್ಯಾಹ್ನ 3.30ಕ್ಕೆ ಸಕಲೇಶಪುರಕ್ಕೆ ಬರಬೇಕಿದ್ದ ಕಾರವಾರ– ಬೆಂಗಳೂರು ರೈಲು ಸಂಚಾರ ವ್ಯತ್ಯಯಗೊಂಡಿದ್ದು, ಕೇರಳದ ಪಾಲಘಾಟ್ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಿತು.