ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ ಎಲ್ಲಾ ಬಸ್‌ಗಳಲ್ಲೂ ರಿಯಾಯಿತಿ ನೀಡಿ

ಹಿರಿಯ ನಾಗರಿಕರ ಮನವಿ
Last Updated 4 ಜುಲೈ 2018, 16:13 IST
ಅಕ್ಷರ ಗಾತ್ರ

ಉಡುಪಿ: ಹಿರಿಯ ನಾಗರಿಕರಿಗೆ ಕರ್ನಾಟಕ ಸಾರಿಗೆ ಮತ್ತು ರಾಜಹಂಸ ಸುವಿಹಾರಿ ಬಸ್‌ಗಳಲ್ಲಿ ನೀಡಿರುವ ಪ್ರಯಾಣ ದರ ರಿಯಾಯತಿಯನ್ನು ನಿಗಮದ ವೋಲ್ವೊ ಮತ್ತು ಸ್ಲೀಪರ್ ಬಸ್‌ಗಳಿಗೂ ವಿಸ್ತರಿಸಬೇಕು ಎಂದು ಹಿರಿಯ ನಾಗರಿಕರಾದ ಐ.ಪ್ರಭಾಕರ ಅಮ್ಮನ್‌ ಪ್ರಕಣೆಯಲ್ಲಿ ಆಗ್ರಹಿಸಿದ್ದಾರೆ.

ಹಿರಿಯ ನಾಗರಿಕರಿಗೆ ಈ ಬಸ್‌ನಲ್ಲಿ ಹತ್ತಿ ಇಳಿಯಲು ಕಷ್ಟವಾಗುತ್ತದೆ. ಈ ಬಸ್‌ಗಳ ಪ್ರಯಾಣ ದರದಲ್ಲೂ ಶೇಕಡ 25ರಷ್ಟು ರಿಯಾಯಿತಿ ನೀಡಬೇಕು ಎಂಬುದು ಹಿರಿಯ ನಾಗರಿಕ ಸಮುದಾಯದ ಬಹುದಿನಗಳ ಬೇಡಿಕೆ. ಈ ಬಗ್ಗೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡಿದರೂ ಫಲಕಾರಿಯಾಗಿಲ್ಲ. ಹಿರಿಯ ನಾಗರಿಕರ ನೆರವಿಗೆ ಕೂಡಲೇ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯದ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಸೌಲಭ್ಯ, ರೈತರ ಕೃಷಿ ಸಾಲ ಮನ್ನಾ ಆಶ್ವಾಸನೆ ನೀಡಿರುವುದು ಶ್ಲಾಘನೀಯ. ಹಿರಿಯ ನಾಗರಿಕರು ಸಮಾಜದ ಅಮೂಲ್ಯ ಆಸ್ತಿ. ಹಿರಿಯ ನಾಗರಿಕರು ಪ್ರಯಾಣಿಸಲು ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿವೋಲ್ವೊ ಹಾಗೂ ಸ್ಲೀಪರ್ ಬಸ್‌ಗಳಿಗೂ ರಿಯಾಯಿತಿ ವಿಸ್ತರಿಸುವಂತೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT