ಗಣಿತ ಎಂದರೆ ಮುಂದಿನ ಭವಿಷ್ಯ ಹೇಳಬಲ್ಲ ಸಾಧನ. ಎಂಜಿನಿಯರಿಂಗ್ ನ ಯಾವುದೇ ವಿಭಾಗದಲ್ಲಿ ಅಧ್ಯಯನ ನಡೆಸಿದರೂ ಗಣಿತ ಪ್ರಮುಖ ಪಾತ್ರ ವಹಿಸುತ್ತದೆ. ವಿಜ್ಞಾನಿಗಳು ಸಹ ಯಾವುದೇ ಸಾಧನೆ ಮಾಡಬೇಕಾದರೆ ಈ ವಿಷಯ ಅಗತ್ಯ ಎಂದರು. ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ಜಯಂತ್ ಮಾತನಾಡಿ, ಹೊಸ ಆವಿಷ್ಕಾರ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ನೀಡಲು ಉಪನ್ಯಾಸಕರಿಗೆ ಪರಿಣತರಿಂದ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ತರಬೇತುದಾರರು, ದೇಶದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಿಂದ ಆಯ್ಕೆಯಾದ ಉಪನ್ಯಾಸಕರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಶಿಬಿರ ಆಯೋಜಕರಾದ ಗುರುರಾಜ್, ಜಿ.ಕೆ. ಕವಿತಾ, ಎಚ್.ರಘು, ಸಿ.ಎಂ. ಚೈತ್ರಾ ಹಾಗೂ ಗಣಿತ ವಿಜ್ಞಾನ ವಿಭಾಗ ಮುಖ್ಯಸ್ಥ ಎಂ.ಕೆ. ಪಾರ್ಥ, ಎಲ್.ಎಸ್. ಭರತನಾರಾಯಣ್, ಟಿ. ರೇವಣ್ಣ, ಕಮೇಶ್ವರ್ ಗೋಸ್ವಾಮಿ ಇದ್ದರು.