ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ಮೈಸೂರು ಭಾಗಕ್ಕೆ ಸಿಕ್ಕ ಯೋಜನೆಗಳು

Mysorepart budget
Last Updated 5 ಜುಲೈ 2018, 11:00 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮೈಸೂರು ಭಾಗಕ್ಕೆ ಸಿಕ್ಕ ಯೋಜನೆಗಳ ಕಿರು ಪರಿಚಯ ಇದು.

*ಹಾಸನ ಹಾಲು ಒಕ್ಕೂಟದಲ್ಲಿ ಶೇ 15 ಲಕ್ಷ ಲೀಟರ್‌ ಸಾಮರ್ಥ್ಯದ ಮೆಗಾ ಡೇರಿ ಸ್ಥಾಪನೆ. ಮೂಲಭೂತ ಸೌಕರ್ಯಕ್ಕಾಗಿ 50 ಕೋಟಿ ಮೀಸಲು

*ಮೈಸೂರಿನಲ್ಲಿ ವೀರ್ಯ ನಳಿಕೆ ವಿತರಣಾ ಕೇಂದ್ರ ಸ್ಥಾಪನೆ

*ತುಮಕೂರಿನಲ್ಲಿ ಕ್ರೀಡೆ ಮತ್ತು ಅಂಗ ಸಾಧನೆಗೆ ಸಂಬಂಧಿಸಿದ ಖಾಸಗಿ ಸಹಭಾಗಿತ್ವದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ. ಅದಕ್ಕೆ ಮೂರು ಕೋಟಿ ಮೀಸಲು

*ಸರ್ಕಾರಿ ಹಾಗೂ ಖಾಸಗಿ ಭದ್ರತಾ ಸಿಬ್ಬಂದಿಗೆ ತರಬೇತಿ ಶಿವಮೊಗ್ಗದಲ್ಲಿ ತಾಯಿನಾಡು ಭದ್ರತಾ ವಿಶ್ವ ವಿದ್ಯಾಲಯ ಸ್ಥಾಪನೆಗೆ 3 ಕೋಟಿ

*ರಾಮನಗರ ಜಿಲ್ಲೆ ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ

*ಮಂಡ್ಯ ಮೆಡಿಕಲ್ ಆಸ್ಪತ್ರೆಯನ್ನು 800 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆ

*ರಾಮನಗರದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 40 ಕೋಟಿ ರೂಪಾಯಿ ಮೀಸಲು

*ಮೈಸೂರಿನಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ತೃತಿಯ ಹಂತದ ಆರೋಗ್ಯ ಸೇವೆಗಳನ್ನು ಒದಗಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

*ಚಾಮರಾಜನಗರ, ಹಾಸನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 450 ಹಾಸಿಗೆ ಸಾಮರ್ಥ್ಯ, 200 ಕೋಟಿ ವೆಚ್ಚ

*ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್‍ಇಡಿ ಉತ್ಪಾದಕ ಫ್ಯಾಕ್ಟರಿ ಸ್ಥಾಪನೆ.

*ಚಿಕ್ಕಬಳ್ಳಾಫುರ ಜಿಲ್ಲೆಯಲ್ಲಿ ಮೊಬೈಲ್ ಫೋನ್ ಬಿಡಿ ಭಾಗಗಳ ಘಟಕ ಸ್ಥಾಫನೆ

*ತುಮಕೂರಿನಲ್ಲಿ ಸ್ಪೊರ್ಟ್ಸ್‌ ಆಂಡ್ ಫಿಟ್‍ನೆಸ್ ವಸ್ತುಗಳ ತಯಾರಿಕ ಘಟಕ.

*ಮೈಸೂರಿನಲ್ಲಿ ಐಸಿಬಿ ಚಿಪ್ ತಯಾರಿಕ ಘಟಕ

*ಹಾಸನದಲ್ಲಿ ಟೈಲ್ಸ್ ಫ್ಯಾಕ್ಟರಿ

*ಭರಚುಕ್ಕಿ ಮತ್ತು ಗಗನಚುಕ್ಕಿ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಮೀಸಲು

*ರಾಮನಗರದಲ್ಲಿ ಆರ್ಟ್ ಆಂಡ್ ಕ್ರಾಪ್ಟ್ ವಿಲೇಜ್

* ಖಾಸಗಿ ಸಹಭಾಗಿತ್ವದಲ್ಲಿ ಕಣ್ವ ಜಲಾಶಯದಲ್ಲಿ ಮಕ್ಕಳ ತಾಣ ನಿರ್ಮಾಣ

*ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಅನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಇದಕ್ಕೆ 5 ಕೋಟಿ ರೂಪಾಯಿ ಮೀಸಲು.

*ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿದೆ.

*ಮಂಡ್ಯ ಜಿಲ್ಲೆ ಲೋಕಪಾವನ ನದಿಯಿಂದ ದುದ್ದ ಕೆರೆಗೆ ನೀರು ತುಂಬಿಸಲು 30 ಕೊಟಿ ರೂಪಾಯಿ ಅನುದಾನ

*ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ( ಖಾಸಗಿ ಸಹಭಾಗಿತ್ವದಲ್ಲಿ)

* ರಾಮಗನರದಲ್ಲಿ ಚಿತ್ರನಗರಿ ಸ್ಥಾಪನೆಗೆ 40 ಕೋಟಿ ಅನುದಾನ

*ಚಿಕ್ಕಬಳ್ಳಾಪುರ ಗೌರಿಬಿದನೂರಿನಲ್ಲಿ ಎಚ್. ನರಸಿಂಹಯ್ಯ ನೆನಪಿನ ವಿಜ್ಞಾನ ಕೇಂದ್ರ ಸ್ಥಾಪನೆ

*ಹಾಸನ ನಗರ ವರ್ತುಲ ರಸ್ತೆ ನಿರ್ಮಾಣಕ್ಕೆ 30 ಕೋಟಿ ಮೀಸಲು.

*ಹಾಸನ ಮತ್ತು ಚನ್ನಪಟ್ಟಣ ಕೆರೆಗಳ ಸಮಗ್ರ ಅಭಿವೃದ್ಧಿಗೆ 136 ಕೋಟಿ

*ಮಂಡ್ಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ 50 ಕೋಟಿ.

*ಮೈಸೂರಿನ ಉಂಡವಾಡಿ ಬಳಿ ಕಾವೇರಿ ಹೆಚ್ಚುವರಿ ನೀರಿನ ಘಟಕ, ನೀರು ಪೂರೈಕೆಗೆ 50 ಕೋಟಿ ರೂಪಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT