‘ನಮ್ಮಲ್ಲಿ ಮೊದಲೂ ಅಲೋಜೆನಿಕ್, ಅಟೋಲಜಸ್ ಚಿಕಿತ್ಸೆಗಳು ಇದ್ದವು. ಆದರೆ ಬಜೆಟ್ನಲ್ಲಿ ಹಣ ಸಿಕ್ಕಿದ್ದರಿಂದ ಇನ್ನೂ ಹೆಚ್ಚಿನ ಗುಣಮಟ್ಟದಲ್ಲಿ ಚಿಕಿತ್ಸೆ ನೀಡಬಹುದು. ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತ ಚಿಕಿತ್ಸೆ ಸಿಗಲಿದೆ. ಎಪಿಎಲ್ ಕಾರ್ಡ್ ಹಾಗೂ ಇತರೆ ರೋಗಿಗಳು ₹3 ರಿಂದ ₹4ಲಕ್ಷ ಪಾವತಿಸಬೇಕಾಗಬಹುದು. ವರ್ಷಕ್ಕೆ 80 ರಿಂದ 100 ರೋಗಿಗಳಿಗೆ ಮೂಳೆ ಮಜ್ಜೆ ಕಸಿ ಮಾಡಬಹುದು’ ಎಂದು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ನಿರ್ದೇಶಕ ಲಿಂಗೇಗೌಡ ಹೇಳಿದರು.