ಶಿರಸಿ: ಆರ್ಥಿಕ ಪರಿಸ್ಥಿತಿ ಮುಚ್ಚಿಟ್ಟು, ಬಜೆಟ್ನಲ್ಲಿ ಮಾಡಿದ ಕಸರತ್ತು ತಾತ್ಕಾಲಿಕ ಖುಷಿಗೆ ಕಾರಣವಾಗಬಹುದಾದರೂ ಪರಿಣಾಮ ಸಕಾರಾತ್ಮಕವಾಗಿರಲು ಸಾಧ್ಯವಿಲ್ಲ. ಚುನಾವಣಾ ಪ್ರಣಾಳಿಕೆಯನ್ನು ಅನುಷ್ಠಾನಕ್ಕೆ ತರುವ ಕಷ್ಟ ಈಗ ಗೋಚರವಾಗುತ್ತಿದೆ. ಸೌಲಭ್ಯದ ಬಹುಪಾಲು ಅಪಾತ್ರರಿಗೆ ದಕ್ಕಿಬಿಡುವ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಸಾಲ ಮನ್ನಾದಂತಹ ಗೊಂದಲದ ವಿಷಯಕ್ಕೆ ಕೈ ಹಾಕುವ ಮುನ್ನ ಸಾಕಷ್ಟು ಅಭ್ಯಾಸದ ಅವಶ್ಯಕತೆಯಿದೆ ಎಂಬುದು ಈ ಬಜೆಟ್ನಲ್ಲಿ ಮೇಲ್ನೋಟಕ್ಕೇ ಅನಿಸುತ್ತದೆ.
–ವಿ.ಪಿ. ಹೆಗಡೆ ವೈಶಾಲಿ, ಸಾಮಾಜಿಕ ಕಾರ್ಯಕರ್ತ