ಇತರ ಸಮುದಾಯಗಳಲ್ಲಿ ಇರುವಂತೆ ಬ್ರಾಹ್ಮಣರಲ್ಲೂ ಆರ್ಥಿಕವಾಗಿ ಹಿಂದುಳಿದ ಜನರಿದ್ದಾರೆ. ಎಲ್ಲ ಜಾತಿಗಳಲ್ಲೂ ಇರುವ ಬಡವರ ಅಭಿವೃದ್ಧಿಯ ಅಗತ್ಯವನ್ನು ಸರ್ಕಾರ ಮನಗಾಣಬಹುದಿತ್ತು. ಅಂತೆಯೇ ಹಿಂದುಳಿದ ಜಾತಿಗಳಲ್ಲಿ ಆರ್ಥಿಕವಾಗಿ ಸಬಲರಾಗಿರುವವರು ಈಗ ಬಳಸಿಕೊಳ್ಳುತ್ತಿರುವ ಸವಲತ್ತುಗಳನ್ನು ತಡೆಹಿಡಿದು ಆ ಮೂಲಕ ಸರ್ಕಾರದ ಅನುದಾನ ದುರುಪಯೋಗ ಆಗುವುದನ್ನು ತಪ್ಪಿಸಬಹುದಿತ್ತು. ಜಾತಿಭೇದ ಇಲ್ಲದೆ ಆರ್ಥಿಕವಾಗಿ ಹಿಂದುಳಿದಿರುವ ಎಲ್ಲರೂ ಸರ್ಕಾರದಿಂದ ಸೌಲಭ್ಯ, ನೆರವು ಪಡೆಯಲು ಹಕ್ಕುದಾರರಾಗಿರುತ್ತಾರೆ.