ಸುಪ್ರೀಂ ಕೋರ್ಟ್ ನಿಯಮಗಳಲ್ಲಿ ಉಲ್ಲೇಖವಾಗಿರುವ ‘ಮುಖ್ಯ ನ್ಯಾಯಮೂರ್ತಿ’ ಎಂಬ ಪದವನ್ನು ಕೊಲಿಜಿಯಂ ಎಂದೇ ಓದಿಕೊಳ್ಳಬೇಕು (ಕೊಲಿಜಿಯಂ ಎಂದರೆ ಐವರು ಹಿರಿಯ ನ್ಯಾಯಮೂರ್ತಿಗಳು ಇರುವ ಸಮಿತಿ). ಹಾಗಾಗಿ ಪ್ರಕರಣಗಳ ಹಂಚಿಕೆ ಕೊಲಿಜಿಯಂನ ಜವಾಬ್ದಾರಿ.ಇದು ಸಿಜೆಐಯ ವಿವೇಚಾನಾಧಿಕಾರ ಆಗಿರಲು ಸಾಧ್ಯವಿಲ್ಲ. ಪ್ರಕರಣಗಳ ವಿಚಾರಣೆಗೆ ಆಯ್ದ ನ್ಯಾಯಮೂರ್ತಿಗಳೇ ಇರುವ ಪೀಠವನ್ನು ಆಯ್ಕೆ ಮಾಡುವುದು ಅಥವಾ ನಿರ್ದಿಷ್ಟ ನ್ಯಾಯಮೂರ್ತಿಗಳಿಗೆ ಪ್ರಕರಣಗಳನ್ನು ನೀಡಲು
ಸಾಧ್ಯವಿಲ್ಲ ಎಂದು ಶಾಂತಿಭೂಷಣ್ ವಾದಿಸಿದ್ದರು.