ಚರ್ಮರೋಗ ವೈದ್ಯರ ಸಂಘದ ಕರ್ನಾಟಕ ಶಾಖೆ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ನಗರದ ಕರ್ನಾಟಕ ವೈದ್ಯಕೀಯ ಸಂಸ್ಥೆ ಆವರಣ, ಚನ್ನಮ್ಮ ವೃತ್ತ, ರೈಲು ನಿಲ್ದಾಣ, ಅಕ್ಷಯ ಪಾರ್ಕ್, ಹುಬ್ಬಳ್ಳಿ ಬಸ್ ನಿಲ್ದಾಣಕ್ಕೆ ಜಾಗೃತಿ ವಾಹನದೊಂದಿಗೆ ತೆರಳಿದ ಸ್ಥಳೀಯ ಚರ್ಮ ರೋಗ ತಜ್ಞರು ಮಾಹಿತಿ ನೀಡಿದರು. ಸಂಕ್ಷಿಪ್ತ ಮಾಹಿತಿ ಇರುವ ಕರಪತ್ರಗಳನ್ನು ಹಂಚಿಸಿದರು. ವಿಡಿಯೊ ತುಣಕುಗಳನ್ನು ಪ್ರದರ್ಶಿಸಿದರು.