ಬೆಂಗಳೂರು: ಮಾಚಿ ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೆ.ಆರ್.ಪುರ ಬಳಿಯ ದೇವಸಂದ್ರದಲ್ಲಿ ನಿರ್ಮಿಸಿರುವ ದೋಬಿ ಘಾಟ್ ಅನ್ನು ಶಾಸಕ ಬಿ.ಎ.ಬಸವರಾಜ್ ಉದ್ಘಾಟಿಸಿದರು.
ಮಡಿವಾಳ ಮಾಚಿದೇವ ಜಯಂತಿಯನ್ನು ಇದೇ ಸಂದರ್ಭದಲ್ಲಿ ಆಚರಿಸಲಾಯಿತು. ತುಳಿತಕ್ಕೆ ಒಳಗಾಗಿದ್ದ ಜನರನ್ನು ಸಬಲರನ್ನಾಗಿ ಮಾಡಲು ಮಾಚಿದೇವ ಅವರು 12ನೇ ಶತಮಾನದಲ್ಲೇ ಶ್ರಮಿಸಿದ್ದರು. ಅನುಭವ ಮಂಟಪ ಕಟ್ಟುವಲ್ಲಿ ಬಸವಣ್ಣ ಪ್ರಮುಖ ಪಾತ್ರ ವಹಿಸಿದ್ದರು ಎಂದು ಬಸವರಾಜ್ ಸ್ಮರಿಸಿದರು.