ಉಸಿರನ್ನು ಕಾಪಾಡುವ ಶಕ್ತಿ ಸಂಗೀತದಲ್ಲಿ ಅಡಗಿದೆ. ಸಂಗೀತಗಾರರಿಗೆ ಆಯುಷ್ಯ ಮತ್ತು ಆರೋಗ್ಯ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು. ಸಂಗೀತ ಮತ್ತು ನೃತ್ಯದ ಜೋಡಿ ಚೆಂದ, ನೃತ್ಯವಿರದೆ ಸಂಗೀತವಿರಬಹುದು, ಸಂಗೀತವಿಲ್ಲದೆ ನೃತ್ಯವಿರಲಾರದು ಎಂದು ತಿಳಿಸಿದರು. ಗಾನಸುಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಬಹುಮಾನ ವಿತರಣೆ ಮಾಡಲಾಯಿತು. ಪುರಸಭಾ ಸದಸ್ಯ ವಿ.ಎಂ.ನಾಗರಾಜ್, ಜೇಸಿ ಸಂಸ್ಥೆಯ ಜನಾರ್ಧನ್, ಮೂರ್ತಿ(ಜಾನಿ), ಆಶಾ ಮಂಜುನಾಥ್, ನವೀನ್ ಕುಮಾರ್ ಇದ್ದರು.