ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬಂತೆ, ಕಾನೂನು ಮುಂದೆ ಸರ್ವರೂ ಸಮಾನರು. ಕಾನೂನು ಪಾಲನೆ ಮಾಡುವುದು, ಗೌರವಿಸುವುದು ದೇಶದ ಎಲ್ಲಾ ನಾಗರಿಕ ಸಮಾಜದ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಯಾರೇ ಕಾನೂನು ವಿರುದ್ದ ನಡೆದುಕೊಂಡರೇ, ಕಾನೂನು ಉಲ್ಲಂಘನೆ ಮಾಡಿದರೆ ಅಪರಾಧಕ್ಕೆ ಒಳಗಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಕಾನೂನು ವ್ಯಾಪ್ತಿಯಲ್ಲಿ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.