ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಪೊದೆಗಳ ನಡುವೆ ಘಟಕಗಳನ್ನು ಸ್ಥಾಪಿಸಲಾಗಿದೆ. ಇನ್ನೂ ಕೆಲವು ಘಟಕಗಳ ಬೀಗವನ್ನೇ ತೆರೆದಿಲ್ಲ. ಶೇ 50ರಷ್ಟು ಕೆಟ್ಟು ನಿಂತಿವೆ. ಸದನ ಸಮಿತಿ ರಚಿಸಿ ವಾಸ್ತವಾಂಶ ಅಧ್ಯಯನ ಮಾಡಬೇಕು’ ಎಂದು ಪಟ್ಟು ಹಿಡಿದರು. ಇದಕ್ಕೆ ಬಿಜೆಪಿಯ ಮಹಾಂತೇಶ ಕವಟಗಿಮಠ, ರಘುನಾಥ ಮಲ್ಕಾಪುರೆ, ಎನ್.ರವಿಕುಮಾರ್, ಪ್ರದೀಪ್ ಶೆಟ್ಟರ್ ಧ್ವನಿಗೂಡಿಸಿದರು. ಘಟಕಗಳ ನಿರ್ವಹಣೆ ಸರಿಯಾಗಿಲ್ಲ ಎಂದು ಕಾಂಗ್ರೆಸ್ನ ಬಸವರಾಜ ಇಟಗಿ, ಪಿ.ಆರ್. ರಮೇಶ್ ಗಮನ ಸೆಳೆದರು.